ನೆಲಮಂಗಲ : ತಾಲೂಕಿನಲ್ಲಿ ಜಗದೀಶ್ ಚೌದರಿಯವರ ಆಟಾಟೋಪ ಹೆಚ್ಚಾಗಿದ್ದು ಪತ್ರಕರ್ತರಿಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡಿ ಧಮ್ಕಿ ಹಾಕುತ್ತಿರುವುದು ಖಂಡನೀಯ, ಪೊಲೀಸರು ಆತನ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್ ತಿಳಿಸಿದರು.

ನಗರದ ತಾಲೂಕಿನ ಕಚೇರಿ ಆವರಣದಲ್ಲಿ ಸ್ವಾಭಿಮಾನಿ ಪತ್ರಕರ್ತರು, ಪ್ರೆಸ್ ಕ್ಲಬ್ ಕೌನ್ಸಿಲ್ ನಿಂದ ಆಯೋಜಿಸಲಾಗಿದ್ದ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ ವಿರುದ್ಧ ಪ್ರತಿಭಟನೆ ಮಾಡಿ ಮಾತನಾಡಿದರು.
ಟಿ.ಬೇಗೂರು ಗ್ರಾಮಪಂಚಾಯಿತಿಯ ಕಚೇರಿ ಬಳಿ ನಡೆದ ಪ್ರತಿಭಟನೆಯ ಸುದ್ಧಿ ಮಾಡಿದ ವರದಿಗಾರರಿಗೆ ಅವಾಚ್ಯ ಶಬ್ದಗಳನ್ನು ನಿಂದನೆ ಮಾಡಿ ರೌಡಿಶೀಟರ್ ಹಾಗೂ ಸಹಚರರಿಂದ ಧಮ್ಕಿ ಹಾಕಿ ಹೆದರಿಸುವುದಲ್ಲದೆ, ಜಾಹಿರಾತು ಪಡೆದು ಅರ್ಧ ಹಣ ನೀಡಿ, ಉಳಿಕೆ ಹಣ ಕೇಳಿದರೆ ಧಮ್ಕಿ ಹಾಕುವುದು, ಬ್ಲಾಕ್ ಮೇಲ್ ಮಾಡಿರುವುದು ಖಂಡನೀಯ, ಈ ಮಟ್ಟಕ್ಕೆ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌದರಿ ಮುಂದಾಗಿದ್ದಾರೆ ಇದರ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷರಿಗೆ ದೂರು ನೀಡಿದರು ಧಮ್ಕಿ ನಿಲ್ಲಿಸಿಲ್ಲ ಆದ್ದರಿಂದ ಕಾನೂನು ರೀತಿ ನ್ಯಾಯಕ್ಕಾಗಿ ತಾಲೂಕು ಕಚೇರಿ ಬಳಿ ಸ್ವಾಭಿಮಾನಿ ಪತ್ರಕರ್ತರು ಹೋರಾಟ ಮಾಡಲಾಗಿದ್ದು ನ್ಯಾಯ ಸಿಗುವ ತನಕ ಹೋರಾಟ ಮುಂದುವರೆಯಲಿದೆ ಎಂದರು.
ಬಿಗ್ ಬಾಸ್ ಖ್ಯಾತಿಯ ವಕೀಲ ಜಗದೀಶ್ ಮಾತನಾಡಿ ಸಮಾಜವೆಂಬ ತೋಟದಲ್ಲಿ ಕಳೆ ಗಿಡಗಳಿರುತ್ತವೆ ಅಂತಹ ಕಳೆಯನ್ನು ತೆಗೆಯಬೇಕಾಗಿರುವುದು ನಮ್ಮ ಕರ್ತವ್ಯ, ಸಮಾಜಕ್ಕೆ ಕನ್ನಡಿಯಾಗಿರುವ ಪತ್ರಕರ್ತರಿಗೆ ಧಮ್ಕಿ ಹಾಕುವುದು ಯಾವ ಮಟ್ಟಕ್ಕೆ ಸರಿ, ಈತ ರೌಡಿಶೀಟರ್ ಆಗಿದ್ದು ಈ ರೀತಿ ಬೆಳವಣಿಗೆಗಳಾದರೂ ಪೊಲೀಸರು ಏಕೆ ಸುಮ್ಮನಾಗಿದ್ದಾರೆ, ಆತನ ವಿರುದ್ಧ ಕ್ರಮವಾಗಬೇಕು ಜತೆಗೆ ಗಡಿಪಾರು ಆಗುವ ತನಕ ನಾನು ಹೋರಾಟ ಮಾಡುತ್ತೇನೆ ಎಂದರು.
ಒತ್ತಾಯ : ಜಗದೀಶ್ ಚೌದರಿ ಗಡಿಪಾರು ಮಾಡುವಂತೆ ಪ್ರತಿಭಟನೆ ಮಾಡಿ ಡಿವೈಎಸ್ಪಿ ಜಗದೀಶ್, ತಹಸೀಲ್ದಾರ್ ಅಮೃತ್ ಅತ್ರೇಶ್ ರವರಿಗೆ ಒತ್ತಾಯದ ಮನವಿ ಪತ್ರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಪ್ರೆಸ್ ಕ್ಲಬ್ ಕೌನ್ಸಿಲ್ ಪ್ರದಾನ ಕಾರ್ಯದರ್ಶಿ ಆಶಾ ಸೀನಪ್ಪ, ರಾಜ್ಯ ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾಧ್ಯಕ್ಷ ಮಂಜುನಾಥ್, ತುಮಕೂರು ಜಿಲ್ಲಾ ಗೌರವ ಅಧ್ಯಕ್ಷ ಸುಧೀಂದ್ರ, ಬೆಂಗಳೂರು ನಗರ ಅಧ್ಯಕ್ಷ ಭಾನು ಪ್ರಕಾಶ್,ನೆಲಮಂಗಲ ತಾಲ್ಲೂಕು ಅಧ್ಯಕ್ಷ ಗಂಗಾಧರ್, ಪ್ರದಾನ ಕಾರ್ಯದರ್ಶಿ ವಿಜಯ್ ,ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ,ಉಪಾಧ್ಯಕ್ಷ ರುದ್ರೇಶ್,ಸದಸ್ಯರಾದ ಹರೀಶ್,ಮಿಲ್ಟ್ರಿ ಮಾಮ,ರಾಜಶೇಖರ್,ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಘಟನಾ ಕಾರ್ಯದರ್ಶಿ ವೇಣು, ಪತ್ರಕರ್ತರುಗಳಾದ ಗುರು ಪ್ರಸಾದ್, ದಾಬಸ್ಪೇಟೆ ರಾಜೇಶ್, ಪ್ರದೀಪ್, ಶ್ರೀಧರ್, ಮಾರುತಿ, ರಾಮ್ ಪ್ರಸಾದ್, ರಾಮಚಂದ್ರ ಬಾಬು, ಬಾಬು,ಕಿಶೋರ್, ಅಲೀಮ್, ನಾಗೇಶ್,ಅಬ್ದುಲ್ ಆಫೀಜ್,ಲಕ್ಷ್ಮಣ್,ಸಿದ್ದರಾಜು, ಪವನ್ ಕುಮಾರ್, ವಂದನಾ,ವರ್ಷ ,ಕವಿತಾ,ಉಮೇಶ್ ಪೂಜಾರ್, ಅರುಣ್ ಕುಮಾರ್, ಮೋಹನ್,ಬೆಂಗಳೂರು ಪ್ರಶಾಂತ್, ಸಂಚಾರಿ ಸತ್ಯ ಸಂಪಾದಕ ಶಂಕರ್ ಜಯರಾಮ್ ಮತ್ತಿತರ ಸ್ವಾಭಿಮಾನಿ ಪತ್ರಕರ್ತರು ಉಪಸ್ಥಿತರಿದ್ದರು.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕು ಪತ್ರಕರ್ತರನ್ನು ಬಿಜೆಪಿ ತಾಲ್ಲೂಕು ಅಧ್ಯಕ್ಷ ಜಗದೀಶ್ ಚೌದ್ರಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಧಮ್ಕಿ ಹಾಕಿರುವ ವಿಚಾರವಾಗಿ ನೆಲಮಂಗಲ ತಾಲ್ಲೂಕು ಸ್ವಾಭಿಮಾನಿ ಪತ್ರಕರ್ತರುಗಳು ಪ್ರೆಸ್ ಕ್ಲಬ್ ಕೌನ್ಸಿಲ್ ನೇತೃತ್ವದಲ್ಲಿ ನೆಲಮಂಗಲ ತಾಲ್ಲೂಕು ಕಚೇರಿ ಎದುರು ಜಗದೀಶ್ ಚೌದ್ರಿ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿ ರೌಡಿ ಶೀಟರ್ ಜಗದೀಶ್ ಚೌದ್ರಿರವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದರು.
ನೆಲಮಂಗಲ ಪತ್ರಕರ್ತರ ಪ್ರತಿಭಟನೆಗೆ ವಕೀಲ್ ಸಾಬ್ ಎಂದೇ ಕ್ಯಾತಿಗಳಿಸಿರುವ ಬಿಗ್ ಬಾಸ್ ಸ್ಪರ್ದಿ ಲಾಯೆರ್ ಜಗದೀಶ್ ರವರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗವಹಿಸಿ ಪತ್ರಕರ್ತರ ಜೊತೆ ನಿಂತು ರೌಡಿ ಶೀಟರ್ ಜಗದೀಶ್ ಚೌದ್ರಿ ಹೆದರಿಕೆ ಬೆದರಿಕೆಗೆ ಪತ್ರಕರ್ತರು ಹೆದರಬಾರದು ರೌಡಿ ಶೀಟರ್ ನನ್ನು ಪೊಲೀಸರು ಮೊದಲು ಮಟ್ಟಹಾಕಿ ಪತ್ರಕರ್ತರನ್ನು ರಕ್ಷಣೆ ಮಾಡಬೇಕು. ನಾನು ಕೂಡ ನಿಮ್ಮ ಜೊತೆ ಇದ್ದೇನೆ ಪೊಲೀಸರು ಕೂಡಲೇ ಆತನ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಸರ್ಕಾರಕ್ಕೆ ನಾನು ಒತ್ತಾಯ ಮಾಡುತ್ತೇನೆ ಎಂದು ತಿಳಿಸಿದರು.
ನೆಲಮಂಗಲ ತಾಲ್ಲೂಕು ಪತ್ರಕರ್ತರಿಗೆ ಜಗದೀಶ್ ಚೌದ್ರಿ ಕೆಲ ವರ್ಷಗಳ ಹಿಂದೆ ಜಾಹಿರಾತು ನೀಡಿದ್ದು ಆ ಹಣವನ್ನು ಫೋನ್ ಪೇ ಮೂಲಕ ನೀಡಿ ಇನ್ನುಳಿದ ಹಣವನ್ನು ನೀಡದೆ ಪತ್ರಕರ್ತರು ಹಣ ಕೇಳಿದ್ರೆ ಬೆದರಿಕೆ ಹಾಕಿ ಪತ್ರಕರ್ತರು ಬ್ಲಾಕ್ ಮೇಲರ್ ಎಂಬಂತೆ ಬಿಂಬಿಸಿದ್ದಾರೆ.
3 ದಿನದ ಹಿಂದೆ ಜಗದೀಶ್ ಚೌದ್ರಿ ವಿರುದ್ಧ ಟಿ.ಬೇಗೂರು ಗ್ರಾಮ ಪಂಚಾಯತ್ ಸದಸ್ಯರೊಬ್ಬರು ಭ್ರಷ್ಟ ಅಧಿಕಾರಿಗಳಿಗೆ ಜಗದೀಶ್ ಚೌದ್ರಿ ಬೆಂಬಲ ನೀಡಬಾರದು ಎಂದು ತಿಳಿಸಿದ್ದು ಈ ಬಗ್ಗೆ ಸುದ್ದಿ ಮಾಡಿದ ಪತ್ರಕರ್ತರುಗಳಿಗೆ ಅವ್ಯಾಚ್ಚ ಶಬ್ದಗಳಿಂದ ನಿಂದಿಸಿ ಸುದ್ದಿ ಮಾಡಿದ ಪತ್ರಕರ್ತರನ್ನು ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು ಪತ್ರಕರ್ತರು ರೋಲ್ ಕಾಲ್ ಎಂದು ಜಗದೀಶ್ ಚೌದ್ರಿ ಸಾರ್ವಜನಿಕವಾಗಿ ಪತ್ರಕರ್ತರನ್ನು ನಿಂದಿಸಿದ್ದು ಪ್ರೆಶ್ನೆ ಮಾಡಿದ ಪತ್ರಕರ್ತರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಸಹಚರ ಮೂಲಕ ತೇಜೋವದೆ ಮಾಡಲು ಮುಂದಾಗಿ ಪತ್ರಕರ್ತರ ಕುಟುಂಬದ ಸಣ್ಣ ಮಗು ಸಹಿತ ಕುಟುಂಬ ಸದಸ್ಯರ ಭಾವಚಿತ್ರಗಳನ್ನು ಹರಿಬಿಟ್ಟು ಹೆದರಿಕೆ ಹಾಕಿದ್ರು ಈ ಬಗ್ಗೆ ಆಕ್ರೋಶಗೊಂಡ ಪತ್ರಕರ್ತರು ರೌಡಿ ಶೀಟರ್ ಜಗದೀಶ್ ಚೌದ್ರಿ ಗಡಿ ಪಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿ ಡಿವೈಎಸ್ಪಿ ಜಗದೀಶ್ ಹಾಗೂ ತಹಸೀಲ್ದಾರ್ ಅಮೃತ್ ಅತ್ರೆಶ್ ರವರಿಗೆ ಪತ್ರಕರ್ತರು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಕೀಲ ಸಾಬ್ ಜಗದೀಶ್, ಪ್ರೆಸ್ ಕ್ಲಬ್ ಕೌನ್ಸಿಲ್ ರಾಜ್ಯಾಧ್ಯಕ್ಷ ರಾಘವೇಂದ್ರ ಆಚಾರ್, ಪ್ರದಾನ ಕಾರ್ಯದರ್ಶಿ ಆಶಾ ಸೀನಪ್ಪ, ರಾಜ್ಯ ಕಾರ್ಯದರ್ಶಿ ಕೊಟ್ರೇಶ್, ಜಿಲ್ಲಾಧ್ಯಕ್ಷ ಮಂಜುನಾಥ್, ತುಮಕೂರು ಜಿಲ್ಲಾ ಗೌರವ ಅಧ್ಯಕ್ಷ ಸುದೀದ್ರ, ಬೆಂಗಳೂರು ನಗರ ಅಧ್ಯಕ್ಷ ಬಾನು ಪ್ರಕಾಶ್,ನೆಲಮಂಗಲ ತಾಲ್ಲೂಕು ಅಧ್ಯಕ್ಷ ಗಂಗಾಧರ್, ಪ್ರದಾನ ಕಾರ್ಯದರ್ಶಿ ವಿಜಯ್ ಹೊಸಪಾಳ್ಯ,ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಬೂದಿಹಾಳ್ ಕಿಟ್ಟಿ,ಉಪಾಧ್ಯಕ್ಷ ರುದ್ರೇಶ್, ಕಾರ್ಯನಿರತ ಪತ್ರಕರ್ತರ ಸಂಘದ ಹರೀಶ್,ಮಿಲ್ಟ್ರಿ ಮಾಮ,ರಾಜಶೇಖರ್,ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆ ಸಂಘಟನಾ ಕಾರ್ಯದರ್ಶಿ ವೇಣು, ಪತ್ರಕರ್ತರುಗಳಾದ ಗುರು ಪ್ರಸಾದ್, ದಾಬಸ್ಪೇಟೆ ರಾಜೇಶ್, ಪ್ರದೀಪ್, ಶ್ರೀಧರ್, ಮಾರುತಿ, ರಾಮ್ ಪ್ರಸಾದ್, ರಾಮಚಂದ್ರ ಬಾಬು, ಹೊಸದಿಗಂತ ಬಾಬು,ಕಿಶೋರ್, ಅಲೀಮ್, ನಾಗೇಶ್,ಅಬ್ದುಲ್ ಆಫೀಜ್,ಲಕ್ಷ್ಮಣ್,ಸಿದ್ದರಾಜು, ಪವನ್ ಕುಮಾರ್, ವಂದನಾ,ವರ್ಷ ,ಕವಿತಾ,ಉಮೇಶ್ ಪೂಜಾರ್,ಅರುಣ್ ಕುಮಾರ್, ಮೋಹನ್,ಬೆಂಗಳೂರು ಪ್ರಶಾಂತ್, ಸಂಚಾರಿ ಸತ್ಯ ಸಂಪಾದಕ ಶಂಕರ್,ಟೈಮ್ 9 ಜಯರಾಮ್, ಮತ್ತಿತರ ಸ್ವಾಭಿಮಾನಿ ಪತ್ರಕರ್ತರು ಉಪಸ್ಥಿತರಿದ್ದರು.

More Stories
ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನ
300ಕೋಟಿ ವೆಚ್ಚದ, 220ಕೆವಿ ವಿದ್ಯುತ್ ಉಪಕೇಂದ್ರಕ್ಕೆ ಗುದ್ದಲಿ ಪೂಜೆ
ಮಾರ್ಚ್ 5ರಂದುನೆಲಮಂಗಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ